ಕಡಲೆ ಬೆಳೆಯಲ್ಲಿ ತುಕ್ಕು ರೋಗ/ ಭಂಡಾರ ರೋಗ (ಯೂರೋಮೈಸಿಸ್ ಸೈಸರ್ ಎರಿಯಾಟಿನಿ) ನಿರ್ವಹಣೆ
ಈ ರೋಗದ ಹತೋಟಿಯು ಕೇವಲ ರಸಾಯನಿಕ ಶಿಲೀಂಧ್ರನಾಶಕಗಳಿಂದ ಮಾತ್ರ ಸಾಧ್ಯ. ಶಿಲೀಂಧ್ರನಾಶಕಗಳಾದ ಅಜಾಕ್ಷಿಸ್ ಸ್ಟೕಬಿನ್ (ಆಮಿಸ್ಟಾರ) 0.5 ಮೀ.ಲಿ. ಮತ್ತು ಹೆಗ್ಸಾಕ್ಲೊನೋಜಾಲ್ (ಟಿಲ್ಟ್) 2 ಮೀ.ಲಿ. ಸಿಂಪರಣೆಯಿಂದ ಈ ರೋಗವನ್ನು ಹತೋಟಿಗೆ ತರಬಹುದು.
ನಿರೋಧಕ ತಳಿಗಳನ್ನು ಉಪಯೋಗಿಸುವದು ಮತ್ತು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವದರಿಂದ ಹೂ ಬಿಡುವ ಕಾಲದಲ್ಲಿ ಉಂಟಾಗತಕ್ಕಂತಹ ಒತ್ತಡವನ್ನು ಕಡಿಮೆ ಮಾಡಿ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.
ತೇವಾಂಶದ ಒತ್ತಡವಿರುವ ಪರಿಸ್ಥಿತಿಯಲ್ಲಿ ಉಷ್ಣಾಂಶ 300 ಗಿಂತ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಈ ರೋಗವ್ರ ಪ್ರಮುಖವಾಗಿ ಕಂಡುಬರುತ್ತದೆ. ಈ ರೋಗವ್ರ ಹೂ ಬಿಡುವ ಅಥವಾ ಕಾಯಿ ಕಟ್ಟುವ ಕಾಳದಲ್ಲಿ ಕಂಡುಬರುತ್ತದೆ. ಗಿಡಗಳು ಸಂಪೂರ್ಣವಾಘಿ ಒಣಗಿ ಹಳದಿಯಾಗುತ್ತವೆ ಮತ್ತು ಬೇರುಗಳು ಕಪ್ಪಾಗಿ ಚೂರಾಗುತ್ತವೆ.
ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಅತೀ ತೀವ್ರವಾಗಿ ಕಂಡುಬರುತ್ತದೆ. ಮಣ್ಣಿನಲ್ಲಿ ಹೆಚ್ಚಿನ ತೇವಾಂಶ, ಸರಿಯಾಗಿ ಕೊಳೆಯದ ಜೈವಿಕ ವಸ್ತು, ಕಡಿಮೆ ಪಿಎಚ್ ಹಾಗೂ ಅಧಿಕ ಉಷ್ಣಾಂಶ (25-300) ಇವ್ರ ರೋಗ ಬೆಳವಣಿಗೆಗೆ ಪೂರಕ. ರೋಗ ತಗುಲಿದ ಭಾಗಗಳಲ್ಲಿ ಶಿಲೀಂದ್ರ ಬೆಳೆಯುತ್ತದೆ, ಅದರಲಲಿ ಸಆಸಿವೆ ಕಾಳಿನಂತೆ ಸಣ್ಣ ಬೀಜಗಳನ್ನು ಕಾಣಬಹುದು.